ರಾಯಚೂರು ಶೇಷಗಿರಿದಾಸರು, ಒಬ್ಬ ಸಂಗೀತಗಾರರು, ಹಾಗೂ ಸಂಗೀತ ನಿರ್ದೇಶಕರು. ಸುಗಮ ಸಂಗೀತ, ಭಕ್ತಿ ಸಂಗೀತ, ದಾಸವಾಣಿ, ವಚನವಾಣಿ, ಹಿಂದಿ ಭಜನ್, ಮರಾಠಿ ಅಭಂಗ್, ಜಾನಪದಗೀತೆ, ಅಲ್ಲದೇ ತಮಿಳು, ತೆಲುಗುಭಾಷೆಗಳಲ್ಲಿಯೂ ಹಾಡುತ್ತಾರೆ. == ಸಂಕ್ಷಿಪ್ತ ಪರಿಚಯ == ತಂದೆ, ಶ್ರೀ ಗೋವಿಂದ ದಾಸರು.ತಾಯಿ,ಶ್ರೀಮತಿ ಜಯಶ್ರೀ ದಾಸರು. ಹರಿದಾಸ ಪರಂಪರೆಯ ಕೌಟುಂಬಿಕ ಹಿನ್ನೆಲೆಯಲ್ಲಿ ಬಂದ ಶ್ರೀ ಅಸ್ಕಿಹಾಳ ಗೋವಿಂದ ದಾಸರ,ಮೊಮ್ಮಗ. == ವಿದ್ಯಾಭ್ಯಾಸ == ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ. ಸಂಗೀತಾಭ್ಯಾಸ:ಹಿಂದೂಸ್ತಾನಿ ಗಾಯನದಲ್ಲಿ ಸೀನಿಯರ್ ಹಾಗೂ ವಿದ್ವತ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ. ಅವರ ಸಂಗೀತ ಗುರುಗಳು, ಶ್ರೀ ಮುಕುಂದ ಗೋರೆ ಹಾಗೂ ಶ್ರೀ ವಿ.ಎಂ. ಜೋಶಿ. == ವಿಶೇಷ ಕಾರ್ಯಕ್ರಮಗಳು == ಹಂಪಿ ಅಂತರಾಷ್ಟ್ರೀಯ ಉತ್ಸವ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಸುಗಮ ಸಂಗೀತ ತಿರುಪತಿ ಬ್ರಹ್ಮೋತ್ಸವದಲ್ಲಿ ಭಕ್ತಿ ಸಂಗೀತ ಧರ್ಮಸ್ಥಳ ನವರಾತ್ರಿ ಉತ್ಸವದಲ್ಲಿ ಭಕ್ತಿ ಸಂಗೀತ ಸುಗಮ ಸಂಗೀತ ಸಮ್ಮೇಳನದಲ್ಲಿ ಸುಗಮ ಸಂಗೀತ ರಾಷ್ಟ್ರೀಯ ದಾಸ ಸಂತ ಸಮ್ಮೇಳನ ಪಂಡರಾಪುರ ಕನಕ ಪುರಂದರ - ಬಸವ - ಷರೀಫ ಉತ್ಸವ ಬಾಗಲಕೋಟೆ ಶ್ರೀ ಕೃಷ್ಣ ಮಠ ಉಡುಪಿ ಸೇರಿದಂತೆ ಸೇಲಂ, ಮುಂಬಯಿ, ದೆಹಲಿ, ಚನ್ನೈ, ಪೂನಾ, ಬದರಿ, ಹರಿದ್ವಾರ, ಕೊಲ್ಲಾಪುರ, ಕೊಯಮತ್ತೂರು, ರಾಮೇಶ್ವರಂ, ಹೀಗೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಉತ್ತರಾಂಚಲ್ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಒಟ್ಟು ಕಾರ್ಯಕ್ರಮಗಳು:ದೇಶ ವಿದೇಶಗಳಲ್ಲಿ ಈವರೆಗೂ ೧೫೦೦ ಕ್ಕೂ ಹೆಚ್ಚು. == ವಿದೇಶ ಕಾರ್ಯಕ್ರಮಗಳು == ೨೦೦೫ ಮಾರ್ಚಿನಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ಭಾರತೀಯ ವಿದ್ಯಾಭವನ ಸಂಸ್ಥೆಗಳು ಜಂಟಿಯಾಗಿ ಲಂಡನ್‌ನಲ್ಲಿ ಇವರ ಕಾರ್ಯಕ್ರಮ ಏರ್ಪಡಿಸಿದವು. ೨೦೦೭ ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಸಂಘದ ವತಿಯಿಂದ ೨೦೦೭ ಸೆಪ್ಟೆಂಬರ್‌ನಲ್ಲಿ ಮಲೇಷಿಯಾ ಕನ್ನಡ ಸಂಘದಿಂದ ಕಾರ್ಯಕ್ರಮ ೨೦೦೮ ಫೆಬ್ರವರಿಯಲ್ಲಿ ಖತಾರ್ ಕನ್ನಡ ಸಂಘದಿಂದ ಕಾರ್ಯಕ್ರಮ. ೨೦೦೮ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್, ಸಿಡ್ನಿ, ಕ್ಯಾನ್‌ಬೆರಾಗಳಲ್ಲಿ ಯಶಸ್ವಿ ಕಾರ್ಯಕ್ರಮ. ೨೦೦೮ ಸೆಪ್ಟೆಂಬರ್‌ನಲ್ಲಿ ಎರಡನೇ ಭಾರಿ ನ್ಯೂಜಿಲೆಂಡಿನಲ್ಲಿ ಕಾರ್ಯಕ್ರಮ. ೨೦೧೦ ಅಮೇರಿಕದ ಅಕ್ಕ ಸಮ್ಮೇಳನದಲ್ಲಿ ಕಾರ್ಯಕ್ರಮ. ಹಾಗೂ ಅಮೇರಿಕದ ಬೇರೆ ಬೇರೆ ಪ್ರದೇಶಗಳಲ್ಲಿ ೩೦ಕ್ಕೂ ಅಧಿಕ ಕಾರ್ಯಕ್ರಮಗಳು. == ಬಿರುದು ಪ್ರಶಸ್ತಿಗಳು == ಆರ್ಯಭಟ ಸಂಸ್ಥೆಯಿಂದ-‘ಆರ್ಯಭಟ ಪ್ರಶಸ್ತಿ’ ಹೊಂಬಾಳೆ ಪ್ರತಿಭಾ ರಂಗದಿಂದ-‘ಸ್ವರ ಮಂದಾರ’ ಪ್ರಶಸ್ತಿ ವ್ಯಾಸ ಮಧ್ವ ಸಂಶೋಧನಾ ಕೇಂದ್ರದಿಂದ-‘ಹರಿದಾಸ ಶ್ರೀ’ ಪ್ರಶಸ್ತಿ ವ್ಯಾಸರಾಜ ಮಠದಿಂದ-‘ಸಂಗೀತ ಶಿರೋಮಣಿ’ ಪ್ರಶಸ್ತಿ ಕಲಾ ವಿಕಾಸ ಪರಿಷತ್ ನಿಂದ-‘ಭಕ್ತಿ ಸಂಗೀತ ವಿದ್ವಾನ್’ ಪ್ರಶಸ್ತಿ ರಾಷ್ಟ್ರೀಯ ರತ್ನ ಪ್ರಶಸ್ತಿ ಇತ್ಯಾದಿ == ಸಂಘಟನೆ == ೧) ರಾಯಚೂರಿನ ಶೃತಿ ಸಾಹಿತ್ಯ ಮೇಳದ ಕಾರ್ಯದರ್ಶಿಯಾಗಿ, ೨) ಬೆಂಗಳೂರಿನ ಹರಿದಾಸ ಸೇವಾ ಇಂಟರ್ ನ್ಯಾಷನಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ೩) ಹರಿದಾಸ ಸಂಗೀತ-ಸಾಹಿತ್ಯೋತ್ಸವ ಸಮಿತಿ, ಮೈಸೂರರಿನ ಗೌರವಾಧ್ಯಕ್ಷರಾಗಿ, ೪) ಹರಿದಾಸ ಸೇವಾ ಪ್ರತಿಷ್ಠಾನದ ಹುಬ್ಬಳ್ಳಿ ಇದರ ಗೌರವಾಧ್ಯಕ್ಷರಾಗಿ, ೫) ಇಂದಿರೇಶ ಪ್ರತಿಷ್ಠಾನ ಗಂಗಾವತಿ ಇದರ ಗೌರವ ಸಲಹೆಗಾರರಾಗಿ ರಾಜ್ಯಾದ್ಯಂತ ಹಲವಾರು ಸಾಂಸ್ಕೃತಿಕ, ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ, ಸಂಸ್ಕೃತಿಯ ಸೇವೆ ಮಾಡುತ್ತಿದ್ದಾರೆ. == ತರಬೇತಿ ಶಿಬಿರ == === ಸುಗಮ ಸಂಗೀತ ತರಬೇತಿ ಶಿಬಿರ === ಹರಿದಾಸ ಗಾಯನ ತರಬೇತಿ ಶಿಬಿರ ವಿಶೇಷವಾಗಿ ೧೦ ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಈ ತರಬೇತಿಗಳನ್ನು ರಾಜ್ಯದ ಹಲವಾರು ಭಾಗಗಳಲ್ಲಿ ಏರ್ಪಡಿಸಿ, ತನ್ಮೂಲಕ ಮಕ್ಕಳಲ್ಲಿ ಸಂಗೀತದ, ಸಾಹಿತ್ಯದ ಸದಭಿರುಚಿಯನ್ನು ಮೂಡಿಸುತ್ತಿದ್ದಾರೆ. === ಧ್ವನಿಸುರುಳಿಗಳು ಹಾಗೂ ಸಿಡಿಗಳು === ಈವರೆಗೆ ಇವರು ಹಾಡಿದ ೧೦೦ಕ್ಕೂ ಹೆಚ್ಚು ಧ್ವನಿ ಸುರುಳಿಗಳು ಬಿಡುಗಡೆಯಾಗಿದೆ. ಅದರಲ್ಲಿ ಕಾಯೋ ಕಾವೇರಿ ಗಂಗ, ಹನುಮಂತ, ದಯಮಾಡಿ ಸಲಹಯ್ಯ, ರಂಗವಿಠಲ, ಮುದ್ದುರಂಗ, ನಿನ್ನ ಒಲುಮೆಯಿಂದ ಮುಂತಾದವು ತುಂಬಾ ಜನಪ್ರಿಯತೆಯನ್ನು ಪಡೆದಿದೆ. === ಸಂಗೀತ ನಿರ್ದೇಶನ === ಸಮೂಹಗಾನ ಸಂಗೀತ ನಿರ್ದೇಶನದಲ್ಲಿ ತುಂಬಾ ಆಸಕ್ತಿ ಹೊಂದಿರುವ ಶೇಷಗಿರಿದಾಸರು ನಿರ್ದೇಶಿಸಿದ ಸಮೂಹಗಾನ ತಂಡ, ರಾಜ್ಯದ ಹಲವಾರು ಕಡೆ ಕಾರ್ಯಕ್ರಮ ನೀಡಿದೆ. ಈವರೆಗೆ ಸುಮಾರು ೧೦೦೦ಕ್ಕೂ ಹೆಚ್ಚು ಕೃತಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. ಇವರು ನಿರ್ದೇಶಿಸಿದ ವಾದ್ಯ ಸಂಗೀತ ನ್ಯೂಜಿಲೆಂಡ್‌ನ, ಟಿ.ವಿ.ವಾಹಿನಿಯೊಂದು ತನ್ನ ಆರಂಭದ ಶೀರ್ಷಿಕೆ ಸಂಗೀತವಾಗಿ ಬಳಸಿಕೊಂಡಿದೆ. === ಪ್ರಕಟಣೆ === ಉತ್ತಮ ಲೇಖಕರಾಗಿರುವ ಶೇಷಗಿರಿದಾಸ್ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇವರು ಸಂಪಾದಿಸಿದ ಅಂದರೆ ೭೫ಕ್ಕೂ ಹೆಚ್ಚು ಹರಿದಾಸರು ರಚಿಸಿದ ೪೦೦ಕ್ಕೂ ಹೆಚ್ಚು ಕೃತಿಗಳಿರುವ ‘ಹನುಮಂತ ಹನುಮಂತ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅಲ್ಲದೇ ಅದು ಅತ್ಯಂತ ಜನಪ್ರೀಯತೆ ಪಡೆದಿದೆ. == ಉಲ್ಲೇಖಗಳು ==